Skip to main content

(ಅ)ಪೂರ್ಣ

ಬರೆದಿದ್ದುAugust 27, 2010
1ಅನಿಸಿಕೆ

ಬಿದಿಗೆ ಚಂದ್ರಮನಿಂದ ಮುನಿದ ಹುಣ್ಣಿಮೆ
ಇರುಳ (ಆ)ವರಿಸುವಾಗ...
ನಿನ್ನ ನೆನಪು ಹಿಂಡುವುದು ಎದೆಯ,
ನಿನ್ನೆಡೆಗೆ ಹಾರುವುದು ಮನವು...

ನನ್ನ ನೆನಪೇ ನಿನ್ನ ಕಾಡುವಾಗ,
ಆ ನೆನಪಿನ ಕಂಪಿನ ಮತ್ತು
ನಶೆ ತರಿಸಿ ಅಮಲೇರಿಸಿ, ನಿನ್ನ
ಉಸಿರಾಟದ ಪ್ರತಿ ಉಸಿರು ನನ್ನ ನೆನೆವಾಗ,
ನೀ ಬಾ ನನಗಾಗಿ,
ಎಲ್ಲವನೂ ತೊರೆದು, ಎಲ್ಲರನೂ ಮರೆತು
ಮತ್ತೆಂದೂ ಅಗಲದಂತೇ...
ಈ ಹುಣ್ಣಿಮೆ ಕರಿಗತ್ತಲೆಯನಪ್ಪಿದಂತೇ...

ಸಾಗರ ಸದಾ ಪೌರ್ಣಿಮೆಯ ವಿರಹಿ
ಅವಳ ನೆನಪಲೇ ಕರಗಿ ಕೊರಗಿ
ಬಳಲುತಿರುವ ಅಸ್ತಮಾ ರೋಗಿ!
ಅವನುಬ್ಬಸದ ಆರ್ಭಟಕೆ ಹೆದರದೇ,
ಹೊಡೆವ ತೆರೆ ಹೆಡೆಗಳಿಗಂಜದೇ
ಕಪ್ಪಾಗಿ ಕರಟಿರುವ ಕರಿಗತ್ತಲ ಬೆಳದಿಂಗಳು
ಸೇರಲಿಲ್ಲವೇ? ನೀ ನೋಡಲಿಲ್ಲವೇ?

ಅಣಕಿಸುವ ಈ ಹುಣ್ಣಿಮೆಯ ಉರಿಸಲು
ನೀನೊಮ್ಮೆ ಬಾ ನನಗಾಗಿ,
ಎಲ್ಲವನೂ, ಎಲ್ಲರನೂ ತೊರೆದು,
ಜಗದ ಅರಿವ ಮರೆತು, ಮತ್ತೆಂದೂ ಅಗಲದಂತೇ...

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

Nagendra Kumar K S ಶುಕ್ರ, 08/27/2010 - 19:45

ತೇಜಸ್ವಿನಿ ಯವರೇ ನಿಮ್ಮ ಕವನ್ ತುಂಬಾ ಚೆನ್ನಾಗಿದೆ. ವಿರಹಿ ತನ್ನ ಪ್ರೀತಿಗೆ ಕಾಯುತ್ತಾ ಅದಕ್ಕಾಗಿ ಕಾತರಿಸುವ ಪರಿ, ಆ ಕ್ಷಣದ ತೊಳಲಾಟ ಚೆನ್ನಾಗಿ ಚಿತ್ರಿಸಿದ್ದೀರ. ನಿಮ್ಮಿಂದ ಉತ್ತಮ ಕವನಗಳು ಬರಲಿ ಎಂದು ಹಾರೈಸುವ
-ನಾಗೇಂದ್ರ ಕುಮಾರ್ ಕೆ.ಎಸ್-

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.