Skip to main content

ಅವ್ಯಕ್ತ

ಬರೆದಿದ್ದುJuly 6, 2010
2ಅನಿಸಿಕೆಗಳು


ಸುತ್ತಮುತ್ತಲೆಲ್ಲಾ ಕಡು
ಹಸಿರು ತುಂಬಿದಾ ಕಾಡು
ಮಳೆಹನಿಗಳ ತಂಪಿಂದ
ಬಿಸಿಯಾಗಿದ್ದ ಭುವಿ
ತನ್ನೆಲ್ಲಾ ಧಗೆಯನ್ನು
ಹೊಗೆಯಾಗಿಸಿ, ಆಗಸಕ್ಕೆ
ಹಾರಿ ಬಿಡುತಿತ್ತು ಬೆಳ್ಮುಗಿಲಾಗಿ....
ಹಾಸಿದ್ದ ಡಾಮರು ರಸ್ತೆಯ ಮೇಲೆ
ಉರುಳುತಲಿದ್ದ ನಾಲ್ಕು ಗಾಲಿಗಳೂ
ನಿಸರ್ಗದ ಸೊಬಗ ಕಣ್ತುಂಬಿಕೊಂಡು
ನಿಧಾನವಾಗಿ ಹಿಂಬಿಡುತ್ತಿರಲು,
ತಟ್ಟೆಂದು ನನ್ನ ನೋಟ
ಪಚ್ಚೆ ಹಸಿರು ಗದ್ದೆಯ
ನಟ್ಟ ನಡುವೆ ನಿಂತಿದ್ದ
ಒಂಟಿ ಮರದಲ್ಲೇ ನೆಟ್ಟಿತೇಕೋ....!
ಚಿತ್ರಕೃಪೆ : bharata.sulekha.com/.../comment/1633572.htm]

- ತೇಜಸ್ವಿನಿ ಹೆಗಡೆ

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

NAGU ಧ, 07/07/2010 - 09:32

ವ್ಯಕ್ತಪಡಿಸಲಾಗದಷ್ಟು ನಿಮ್ಮ "ಅವ್ಯಕ್ತ" ಕವನ ಚೆನ್ನಾಗಿದೆ ಸಿಸ್ಟರ್.....ಸೂಪರ್ (ಅಕ್ಕಾ ನೀವು ಪರಿಸರ ಪ್ರೇಮಿನಾ?)

ತೇಜಸ್ವಿನಿ ಹೆಗಡೆ ಗುರು, 07/08/2010 - 16:27

ಧನ್ಯವಾದಗಳು ನಾಗು ಅವರೆ.
ಹೊದು ನಾನು ಪರಿಸರ ಪ್ರೇಮಿ. ಪ್ರತಿಯೊಬ್ಬನೂ ಈ ಪ್ರೇಮಿಯ ಸಖ/ಸಖಿಯಾದರೆ ಪ್ರಕೃತಿಯ ಅಳಿವು ನಿಲ್ಲಬಹುದೇನೋ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.