Skip to main content

ಹೊಳೆಆಲೂರಲ್ಲಿ ಕವಿವಿ ೨ನೇ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಕವಿವಿ ೨ನೇ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಇಂದ prabhu
ಬರೆದಿದ್ದುFebruary 11, 2020
noಅನಿಸಿಕೆ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಕವಿವಿ ೨ನೇ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ದಿ.೧೦ರಂದು ಶ್ರೀ ಯಚ್ಚರೇಶ್ವರ ಸ್ವಾಮಿಗಳು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಸಮಿತಿ ಆಡಳಿತ ಮಂಡಳಿ ಸದಸ್ಯ ಕೆ.ಪಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರಾದ ಎಂ.ಸಿ.ಬ್ಯಾಡಗಿ,ಬಿ.ಬಿ.ಸಾಸಳ್ಳಿ, ಎಂ.ಬಿ.ಕೋಳೇರಿ, ಬಿ.ಎಲ್.ಬದಾಮಿ ಆಗಮಿಸಿದ್ದರು.ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಪ್ರಾಸ್ತಾವಿಕವಾಗಿ ಮಾತನಾಡಿ ಒಟ್ಟು ೧೬ ತಂಡಗಳು ಭಾಗವಹಿಸಿದ ಬಗ್ಗೆ ತಿಳಿಸಿದರು.ಕ್ರೀಡಾವಿಭಾಗದ ಚೇರಮನ್ ಡಾ.ಬಸವರಾಜ ಬೆಳವಟಗಿ, ಸ್ವಾಗತಿಸಿದರು. ಪ್ರೊ.ಎನ್.ಎಸ್.ಹುಣಶೀಕಟ್ಟಿ ನಿರೂಪಿಸಿದರು.ದೈಹಿಕ ನಿರ್ದೇಶಕ ಮಂಜುನಾಥ ಸೋಮನಕಟ್ಟಿ ವಂದಿಸಿದರು. ನಿರ್ಣಾಯಕರಾಗಿ ದೇವೇಂದ್ರ ಯರಗುದರಿ, ಮುತ್ತಣ್ಣ ಪ್ರಧಾನಿ,ಎಸ್.ಎಸ್.ಗುಳೇದಗುಡ್ಡ, ಎ.ಕೆ.ಅರಹುಣಸಿ, ರಾಜೇಂದ್ರ ಮೆಲ್ಮನಿ,ಮೋಹನ ಹೊಸಕೋಟೆ,ಲಕ್ಷ್ಮಣ ಹುಲ್ಲೂರ್,ಪ್ರವೀಣ ಕಗದಾಳ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ಕಡಪಟ್ಟಿ,ಡಾ.ಪ್ರಭು ಗಂಜಿಹಾಳ,ಡಾ.ಪಿ.ಎಸ್.ಕಣವಿ,ಡಾ.ಎಸ್.ಬಿ.ಸಜ್ಜನರ್, ಡಾ.ಎಸ್.ಎಸ್.ಹುರಕಡ್ಲಿ, ಪ್ರೊ.ಆರ್.ಎಸ್.ಪಾಟೀಲ್, ಪ್ರೊ.ಎಂ.ಸಿ.ಹುಲ್ಲಣ್ಣವರ್, ಪ್ರೊ.ಎನ್.ಆರ್.ಹಿರೇಸಕ್ಕರಗೌಡರ್,ಪ್ರೊ.ಗಂಗಾಧರ ಚಕ್ರಸಾಲಿ, ಪ್ರೊ.ಗಂಗಾಧರ ಬೀಳಗಿ,ಪ್ರೊ.ಎಂ.ಕೆ.ರೊಟ್ಟಿ, ಪ್ರೊ.ರೇಶ್ಮಾ ಟಕ್ಕೇದ್ ಪ್ರೊ.ಪಿ.ಆರ್.ಸದುಗೋಳ,ಪ್ರೊ.ಎಚ್.ಕೆ.ರಾಜೂರ್, ಪ್ರೊ.ಎಸ್.ವಾಯ್.ಪೂಜಾರ್ ,ಅಧೀಕ್ಷಕ ಎಂ.ವಿ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಅತಿಥೇಯ ಕಲ್ಮೇಶ್ವರ ಕಾಲೇಜಿನ ತಂಡ ಮತ್ತು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನ ತಂಡದ ನಡುವೆ ನಡೆದ ಆರಂಭಿಕ ಪಂದ್ಯದಲ್ಲಿ ಹೊಳೆಆಲೂರ ಕಾಲೇಜಿನ ತಂಡ ೩೯ ಅಂಕಗಳಿಂದ ಗೆಲವು ಪಡೆದುಕೊಂಡಿತು.
-ಡಾ.ಪ್ರಭು ಅ ಗಂಜಿಹಾಳ್
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.