Skip to main content

ಪ್ರತಿಜ್ಞೆ

ಪ್ರತಿಜ್ಞೆ
ಇಂದ prabhu
ಬರೆದಿದ್ದುJune 18, 2019
noಅನಿಸಿಕೆ

ಕಾಡಿನ ಲೋಕದ ಆಲದ ಮರದಡಿ
ಪ್ರಾಣಿಗಳೆಲ್ಲ ಸೇರಿದವು |
ತಮ್ಮಯ ತೊಂದರೆ ಪಟ್ಟಿಯನೆಲ್ಲ
ಸಿಂಹದ ಮುಂದೆ ಹೇಳಿದವು ||೧||
ಕುಡಿಯಲು ನೀರು ಸಿಗುತಿಲ್ಲ
ಬತ್ತುತಿವೆ ಹಳ್ಳಕೊಳ್ಳಗಳೆಲ್ಲ |
ತಿನ್ನಲು ಹಣ್ಣು ಹಂಪಲವಿಲ್ಲ
ಗೆಡ್ಡೆ ಗೆಣಸುಗಳು ಸಾಲುತಿಲ್ಲ ||೨||
ಮರಗಳ ಕಡಿದು ಕಾಡೆ ಮಾಯ
ಆದರೆ ನಾವು ಬದುಕೋದೆಲ್ಲಿ |
ಬೇಟೆಗಾರರ ಹಾವಳಿಯಿಂದ
ಜೀವಭಯವಿದೆ ನಮಗಿಲ್ಲಿ ||೩||
ಕಾಡಿನ ರಾಜ ಎಲ್ಲವ ಕೇಳಿ
ಎಲ್ಲರ ಜೊತೆಗೆ ಚರ್ಚಿಸಿದ |
ಒಬ್ಬೊಬ್ಬರ ಮಾತು ಎಲ್ಲವ ಸೇರಿಸಿ
ತಕ್ಷಣ (ಪರಿಹಾರಕೆ) ದಾರಿ ಹುಡುಕಿದ ||೪||
ಹೊರಗಿನ ಯಾರೇ ಬಂದರೆ ಕೂಡಲೇ
ಎಲ್ಲರಿಗೆ ಎಚ್ಚರಿಕೆ ಕೊಡೋಣ |
ನಮ್ಮ ನಡುವಿನ ವೈರವ ಬಿಟ್ಟು
ಪ್ರೀತಿ ಸಹನೆಯಲಿ ಬಾಳೋಣ||೫||
ನಮ್ಮಯ ಅಳುವಿನ ಉಳುವಿಗೆ ನಾವು
ಮರಗಿಡಗಳನು ಬೆಳೆಸೋಣ |
ಮುಚ್ಚಿದ ತೊರೆಗಳ ಸ್ವಚ್ಛಮಾಡಿ
ಅಲ್ಲಲ್ಲಿ ಕಟ್ಟೆಯ ಕಟ್ಟೋಣ||೬||
ಕಾಡಿನ ರಾಜನ ಮಾತಿಗೆ ಒಪ್ಪಿ
ಎಲ್ಲವೂ ಪ್ರತಿಜ್ಞೆ ಮಾಡಿದವು |
ಅರಣ್ಯ ಉಳಿಸಿ ಪರಿಸರ ಬೆಳೆಸಿ
ಒಕ್ಕೂರಲಿ ಕೂಗಿ ಹೇಳಿದವು ||೭||
ಗಿಡಗಳಾ ಬೆಳೆಸಿ ನೀರನು ಕಟ್ಟಲು
ಆಗಲೇ ಜೊತೆಗೆ ಹೊರಟವು|
ಒಗ್ಗಟ್ಟಲಿ ಬಲವಿದೆ ಗೆಲುವಿದೆ
ಎಂಬುದ ಸಾರಿ ಹೇಳಿದವು ||೮||
ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.