Skip to main content

ಪ್ರಕೃತಿ

ಪ್ರಕೃತಿ
ಇಂದ prabhu
ಬರೆದಿದ್ದುFebruary 11, 2019
noಅನಿಸಿಕೆ

ನೀಲಿಯ ಬಣ್ಣ ಅದರೊಳು ಕಣ್ಣ
ಸೆಳೆವನು ನವಿಲಣ್ಣ|
ಕರಿಯ ಬಣ್ಣ ಆದರೂ ಚಿನ್ನ
ಕೋಗಿಲೆ ಕಂಠವು ಬಲು ಚೆನ್ನ||೧||
ವಿಧ ವಿಧ ಹೂಗಳು ಅರಳಿದ ನೋಟವು
ಕಣ್ಣಿಗೆ ಎಂಥ ಚೆಂದ|
ಘಮ್ಮನೆ ಹೊಮ್ಮುವ ಪರಿಮಳವೆಲ್ಲ
ಆಘ್ರಾಣಿಸಲು ಆನಂದ||೨||
ಪಾತರಗಿತ್ತಿಯ ಬಣ್ಣದ ಪಕ್ಕವು
ಪಟ ಪಟ ಬಡೆವದು ಏನಂದ|
ಚಂಗನೆ ಜಿಗಿದು ಓಡುವ ಜಿಂಕೆಯ
ಓಟದ ನೋಟವೆ ಅತಿಚೆಂದ||೩||
ಸುಳು ಸುಳು ಸುಳಿವ ತಣ್ಣನೆ ಗಾಳಿ
ಸೋಕಲು ಖುಷಿ ಮನಸು|
ಜುಳು ಜುಳು ಹರಿವ ನೀರಲಿ ಆಟವು
ಆಡಲು ಬಲು ಸೊಗಸು||೪||
ಎಲ್ಲವೂ ಉಂಟು ಈ ಜಗದಲ್ಲಿ
ಮಣ್ಣಲಿ ಹೊನ್ನು ಸಿಗುವಲ್ಲಿ|
ಭಕ್ತಿಯ ಮಾರ್ಗದ ನೆಲೆಯಲ್ಲಿ
ಮುಕ್ತಿಯ ಪಡೆಯುವ ಛಲವಿಲ್ಲಿ||೫||
ಜಗದಲಿ ಎಲ್ಲಡೆ ಸುತ್ತಿ ಬಂದರೂ
ಭಾರತ ದೇಶವೆ ಸುಂದರ|
ಅದರಲೂ ನಮ್ಮ ಕರುನಾಡಂತೂ
ಸಿರಿಗಂಧದ ಚಂದದ ಮಂದಿರ||೬||
* ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.