Skip to main content

ಮೂರು ಜೋಕುಗಳು

ಇರಲಿ ಎಚ್ಚರ
ಬರೆದಿದ್ದುDecember 13, 2018
noಅನಿಸಿಕೆ

।ವಾಸ್ತುದೋಷ।
ಪಕ್ಕದ ಮನೆಯ ಕಿಟಕಿ ನಿಮ್ಮ ರೀಡಿಂಗ್ ರೂಮಿನ ಕಿಟಕಿಗೆ ಅಭಿಮುಖವಿದೆಯೇ?
ವಾಸ್ತು ದೋಷಕ್ಕೆ ಇದೇ ಮೂಲಹೇತು. ಪತ್ನಿಯು ಕಾರಣವಿಲ್ಲದೇ ನಿಮ್ಮ ಮೇಲೆ ಅಸಮಾಧಾನಗೊಂಡಾಳು, ಸಿಡಿಮಿಡಿಗೊಂಡಾಳು, ಮನೆಯ ಸದಸ್ಯರು ಪ್ರತೀದಿನ ಅಡುಗೆಯ ಉಪ್ಪು ಹುಳಿ ಖಾರದ ಮಾರ್ಕೆಟ್ ರೇಟಿನಲ್ಲಿ ಏರಿಳಿತ ಕಾಣಬೇಕಾದೀತು ಎಚ್ಚರಾ!!
ಕೂಡಲೇ ನಿಮ್ಮ ಕಿಟಕಿಯನ್ನು ಬೇರೆಡೆಗೆ ಶಿಫ್ಟ್ ಮಾಡಿ!!
*=*=*
॥ಮೋಕ್ಷ ಬೇಕು॥
ಎಳೆಯ ಪ್ರಾಯದ ಭಕ್ತನ ಕಠಿಣ ತಪಸ್ಸಿಗೆ ಕೊನೆಗೂ ಪ್ರತ್ಯಕ್ಷನಾದ ಭಗವಂತ
''ಕಂದಾ ನಿನಗೇನು ಬೇಕು? ಕೋರು" ಎಂದಾಗ ಭಕ್ತನು ವಿನಯದಿಂ ವಂದಿಸುತ
"ಪರಮಾತ್ಮಾ, ನನಗೆ ಮೋಕ್ಷ ಮಾತ್ರ ಬೇಕು. ಬೇರೇನು ಬೇಡ"
ಭಗವಂತ: ವಾವ್! ಮಾರ್ವೆಲಸ್!! ಎಕ್ಸೆಲೆಂಟ್!! ಫೆಂಟಾಸ್ಟಿಕ್!! ಈ ಎಳೆ ಪ್ರಾಯದಲ್ಲೇ ಪ್ರಾಪಂಚಿಕ ಭೋಗಲೋಲುಪತೆಯಿಂದ ವಿಮುಖನಾಗಿ ಸಾಯುಜ್ಯದೆಡೆ ಮುಖ ಮಾಡಿರುವ ನಿನಗಿದೋ ಹಾರ್ದಿಕ ಸ್ವಾಗತ..
ಬಾ, ನಿನ್ನನ್ನು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತೇನೆ.
ಭಕ್ತ: ಅಯ್ಯೋ ದೇವಾ ನಿಮ್ಗೆ ಕನ್ಫ್ಯೂಷನ್ ಆದಂಗಿದೆ! ನಂಗೆ ನನ್ನ 'ಕ್ಲಾಸ್ಮೇಟ್ ಮೋಕ್ಷಾ' ಬೇಕು ಭಗವಂತಾ! ಅವಳಿಲ್ಲದೆ ನಾ ಬದುಕಲ್ಲ!
*=*=*
ತಾನು ತನ್ನ ಪತಿದೇವನನ್ನು ಅತಿಯಾಗಿ ಪ್ರೀತಿಸುತ್ತೇನೆಂದು ಯಾವ ಹೆಣ್ಣೂ ಬೀಗಬೇಕಿಲ್ಲ.
ಇದು ಹೆಣ್ಣಿಗೆ ದೇವರಿತ್ತ ವರ..

ಲೇಖನದ ಬಗೆ

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.