Skip to main content

ಇತ್ತೀಚೆಗೆ ಹಿಂದೂ ದೇವರ ನಿಂದನಾ ಹೇಳಿಕೆ ನೀಡಿದ ಕಲಬುರ್ಗಿ, ಅನಂತಮೂರ್ತಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಇಂದು ಕನ್ನಡ ಸಾಹಿತ್ಯದಲ್ಲಿ ಹೊಸ ಕೃಷಿಗಿಂತ ಪ್ರಚಾರಕ್ಕಾಗಿ ವಿವಾದಾತ್ಮಕ ಹೇಳಿಕೆ ರೂಢಿಸಿಕೊಂಡಿದ್ದಾರೆಯೇ?  ನಿಮ್ಮ ಅನಿಸಿಕೆ ಏನು? ಇಂತಹ ಮೂರ್ಖ ಹೇಳಿಕೆಗಿಂತ ಒಂದು ಉತ್ತಮ ಸಾಹಿತ್ಯ ಬರೆಯುವದರಲ್ಲಿ ತೊಡಗಿಸಿ ಕೊಂಡಿದ್ದರೆ ಉತ್ತಮ ಅನ್ನುವದು ನನ್ನ ಅನಿಸಿಕೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಮಂಗಳ, 07/01/2014 - 19:22

ಮಾನ್ಯರೇ, ನಮ್ಮ ಕನ್ನಡ ಸಾಹಿತಿಗಳು ಯಾರಿಗೂ ಕಡಿಮೆ ಇಲ್ಲ. ಜ್ನಾನಪೀಠ ಪ್ರಶಸ್ತಿ ವಿಜೇತರು ಇದ್ದಾರೆ. ಮೊದಲಾದರೆ ನಮ್ಮ ಕನ್ನಡ ಜನರು ದಿನ ಪತ್ರಿಕೆಗಳನ್ನು ಬಿಟ್ಟರೆ ನಮ್ಮ ಎಲ್ಲಾ ಕನ್ನಡ ಕವಿಗಳ ಕಥೆ,ಕವನ ಓದುತ್ತಿದ್ದರು. ಮೆಚ್ಚುತ್ತಿದ್ದರು. ಈಗ ಟಿ.ವಿ. ಬಂದ ಮೇಲೆ ಮನೆಯವರೆಲ್ಲಾ ದಾರವಾಹಿಗಳ ಮೊರೆ ಹೋಗಿದ್ದಾರೆ. ಪುಸ್ತಕಗಳನ್ನು ಬಿಡುವಿದ್ದಾಗ ಓದುತ್ತಿದ್ದರು. ಅದೇ ಟಿ.ವಿ. ಬಂದ ಮೇಲೆ ಊಟ ಬಿಟ್ಟರೂ ಸರಿ ದೇವರ ಪೂಜೆ ನಿಲ್ಲಿಸಿದರೂ ಸರಿ, ದೇವಸ್ಠಾನಕ್ಕೆ ಹೋಗುವುದನ್ನು ತಪ್ಪಿಸಿದರೂ ಸರಿ ಅಡಿಗೆ ಕೆಟ್ಟರು ಸರಿ ಧಾರವಾಹಿಗಳಿಗೆ ಪ್ರಾಧಾನ್ಯತೆ ಕೊಡಲು ಶುರು ಮಾಡಿದ ನಂತರ ಕಥೆ ಪುಸ್ತಕಗಳು ಮೂಲೆಗುಂಪಾದವು. ಗ್ರಾಥಾಲಯಗಳು ಖಾಲಿ ಹೊಡೆಯುತ್ತಿವೆ. ಅಷ್ಟೇ ಏಕೆ ರಾಮಾಯಣ, ಮಹಾಭಾರತ, ಮುಂತಾದ ಧರ್ಮಗ್ರಂಥಗಳು ಮೂಲೆ ಸೇರಿದವು. ಅವುಗಳನ್ನು ಹಿರಿಯರೇನು ಮಕ್ಕಳು ತೆಗೆದು ನೋಡುತ್ತಿಲ್ಲಾ. ಇಂತಹ ಸಂದರ್ಭದಲ್ಲಿ ನಮ್ಮ ಕವಿಗಳನ್ನು ಯಾರು ಕೇಳುತ್ತಾರೆ. ಆವರು ಸದಾ ಸುದ್ದಿಯಲ್ಲಿರಬೇಕು. ಇಲ್ಲವಾದರೆ ಜನ ಮರೆತುಹೋಗುತ್ತಾರೆಂಬ ಭಾವನೆ ಅವರದು. ಆದುದರಿಂದ ಈ ರೀತಿಯ ಅಸಂಬದ್ದ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುತ್ತಾರೆ. ಇಂತಹ ಹೇಳಿಕೆ ನೀಡಿದಾಗ ಇಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಅದೇ ರೀತಿ ಎಲ್ಲ ದೃಶ್ಯ ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ. ಇದರಿಂದ ಆ ರೀತಿಯ ಹೇಳಿಕೆ ನೀಡುತ್ತಾರೆ.ಇದು ನಮ್ಮ ಕನ್ನಡಿಗರ ದುರಾದೃಷ್ಥ.

ನವೀನ್ ಚ೦ದ್ರ ಗುರು, 07/03/2014 - 21:32

ಮನುಷ್ಯನ ಸಹಜಗುಣ ಅಂದರೆ ಪ್ರಚಾರಪ್ರಿಯತೆ ಪಡೆಯುವುದು, ಬೇರೆಯವರು ನಮ್ಮನ್ನು ಗುರುತಿಸಲಿ ಎಂಬ ಮನೋಭಾವ ಆದರೆ

 ಇದು ಕೆಲವರಲ್ಲಿ ಇದು ಹೆಚ್ಹಾಗಿರುತ್ತದೆ ಮತ್ತೆ ಕೆಲವರಲ್ಲಿ ಅವರ ಪ್ರಚಾರಕಿಂತ ಕೆಲಸವಿರುತ್ತದೆ. ಆದರೆ ಇಂದು ಭಾರತದಲ್ಲಿ ಕೆಲಸಕ್ಕಿಂತ ಹೆಚ್ಹಾಗಿ 

ಪ್ರಚಾರ ಪಡೆಯುವುದೇ ಒಂದು ಗೀಳಾಗಿರುವುದು ನಿಜಕ್ಕು ನುಂಗಲಾರದ ತುತ್ತು...

shubha ಸೋಮ, 09/01/2014 - 14:40

ನಮ್ಮ ಸಾಹಿತಿಗಳು ಬಹಳ ಪ್ರತಿಭಾವಂತರೇ. ಅದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ನಮ್ಮ ಕನ್ನಡಕ್ಕೆ ಸಂದಿರುವ ಪ್ರಶಸ್ತಿಗಳೇ ಸಾಕ್ಷಿ. ಆದ್ರೂ ನಮ್ಮ ಕೆಲವು ಸಾಹಿತಿಗಳು ನಾನು ಹಿಡ್ದಿರೋ ಮೊಲಕ್ಕೆ ಮೂರೇ ಕಾಲು ಅನ್ನೋ ಹಾಗೆ ಆಡ್ತಾರೆ. ಆರೋಗ್ಯವಂತ ಸಮಾಜಕ್ಕೆ ಇದು ಉತ್ತಮ ಬೆಳವಣಿಗೆಯಲ್ಲ.

 

 

 

 

  • 1381 views