Skip to main content

ಹಾಸ್ಯ:

ಇಂದ ಚಂದ್ರ
ಬರೆದಿದ್ದುNovember 12, 2012
1ಅನಿಸಿಕೆ

ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ
ತಿಮ್ಮ: ಆಮೇಲೆ ಏನಾಯಿತು?
ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ

 

 

ನೂತನವಾಗಿ ಕೆಲಸಕ್ಕೆ ಸೇರಿಕೊಂಡ ಸಂತಾ ಬೆಳಗ್ಗಿನಿಂದ ಸಂಜೆತನಕ ಕಷ್ಟಪಟ್ಟು ದುಡಿದ ಅದನ್ನು ಗಮನಿಸಿದ ಬಾಸ್, ತುಂಬಾ ಕೆಲಸ ಮಾಡಿದ್ದೀರಾ ಸರಿ ಏನೇನೂ ಮಾಡಿದಿರಿ ಎಂದು ಪ್ರಶ್ನಿಸಿದರು.
ಸಂತಾ: ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡೆ ಎಂದು ಉತ್ತರ ಕೊಟ್ಟ.

 

 

ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು.
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್‍ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!

 

 

ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಏಕೆ ಹೋಯ್ತು?
ಗುಂಡ: ನನ್ನ ಹೆಂಡತಿ ಚಕ್ಕುಲಿ ಮಾಡಿದ್ಲು.....
ಡಾಕ್ಟರ್: ಬೇಡಾ ಅನ್ಬೇಕಿತ್ತು ಅಲ್ವಾ?
ಗುಂಡ:ಆಯ್ಯೋ ತಿಂದಿದ್ದಕ್ಕೆ ಒಂದು ಹೋಯ್ತು,ಬೇಡಾ ಅಂದದ್ದಕ್ಕೆ ಇನ್ನೂ ಮೂರು ಹೋಯ್ತು

 

 

ಗೆಳೆಯ : ಕವಿತೆಗೂ ಪ್ರಬಂಧಕ್ಕೂ ಏನು ವ್ಯತ್ಯಾಸ?
ಗುಂಡ : ಗೆಳತಿಯರ ಬಗ್ಗೆ ಮಾತನಾಡಿದರೆ ಕವಿತೆ,
ಹೆಂಡತಿಯರ ಬಗ್ಗೆ ಮಾತನಾಡಿದರೆ ಪ್ರಬಂಧ..

 

 

 


ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಅನಿಸಿಕೆಗಳು

DIVAKARA ಗುರು, 12/27/2012 - 17:07

ತು೦ಬಾ ಚನ್ನಾಗಿದೆ ಚ೦ದ್ರು ಅಣ್ಣಾ

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.