Skip to main content

ಹಸಿರು ಸೇನೆ

ಹಸಿರು ಸೇನೆ
ಇಂದ prabhu
ಬರೆದಿದ್ದುJanuary 24, 2019
noಅನಿಸಿಕೆ

ಹಸಿರೆ ಉಸಿರಾಗಿಸಿಕೊಂಡ
ಹಸಿರು ಸೇನೆಯವರು|
ಮನೆಗೊಂದು ಮರ ನೆಡಲು
ನಿಮ್ಮ ಮನೆ ಬಾಗಿಲಿಗೆ ಬಂದವರು||೧||
ಹರಿದು ಹೋಗುವ ನೀರ ನಿಲ್ಲಿಸಿ
ಇಂಗಿಸುವವರು ನಾವು|
ನೆರಳು ಫಲವನು ಕೊಡುವ ಮರಗಳ
ಬೆಳಸಿರೆಲ್ಲ ನೀವು||೨||
ಮನೆಗೊಂದು ಮರ ಊರಿಗೊಂದು ವನ
ನಿರ್ಮಾಣವಾಗಲೇ ಬೇಕು|
ಇಅದಕೆ ನಾವು ನೀವೆಲ್ಲ ಸೇರಿ
ಸ್ವಲ್ಪ ಶ್ರಮಿಸಿದರೆ ಸಾಕು||೩||
ಪ್ರಾಣಿ ಪಕ್ಷಿ ಪಶುಗಳೇಲ್ಲಕೂ
ಬದುಕ ಕಲ್ಪಿಸಬೇಕು|
ನೀರು ಆಹಾರ ಆಶ್ರಯಕೆ
ಮರಗಿಡಗಳ ನೆಡಲೇ ಬೇಕು||೪||
ಓ ಬನ್ನಿ ಗೆಳೆಯ ಗೆಳತಿಯರೆ
ಸೋದರ ಸೋದರಿ ಊರೆಲ್ಲ ಜನಗಳೆ|
ಹಚ್ಚೋಣ ಸಸಿಗಳ ಎಲ್ಲಡೆಯೂ ನಾವೆಲ್ಲ
ನಾಳಿನ ಪೀಳಿಗೆ ಬಳುವಳಿ ಈ ಗಿಡಗಳೆ||೫||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.