Skip to main content

ಯುವಶಕ್ತಿ (ಎನ್ ಎಸ್ ಎಸ್ ಗೀತೆ)

ಯುವಶಕ್ತಿ
ಇಂದ prabhu
ಬರೆದಿದ್ದುJanuary 9, 2019
noಅನಿಸಿಕೆ

ಕೆರೆಯ ಸುತ್ತ ಬೇಲಿ ಹಚ್ಚಿ
ಜೀವ ಜಲವ ರಕ್ಷಿಸಿ|
ನೀರ ಮೂಲ ನೆಲೆಯ ಹುಡುಕಿ
ಹರಿದು ಬರಲು ಯತ್ನಿಸಿ||೧||
ಒಬ್ಬರೊಂದು ಗಿಡವ ಹಚ್ಚಿ
ನಾಡ ಬರವ ಅಳಿಸೋಣ|
ಮಣ್ಣ ಸವಕಳಿ ತಡೆಯಲು
ಮರಗಿಡಗಳ ಬೆಳಸೋಣ ||೨||
ಮನೆಗೊಂದು ಶೌಚವನು ಕಟ್ಟಿಸಿ
ಸ್ವಚ್ಚತೆಯ ಅರಿವು ಮೂಡಿಸೋಣ|
ಸ್ವಾಸ್ಥ್ಯ ಸಮಾಜ ನಿರ್ಮಾಣಕಾಗಿ
ಮಾನವ ಸರಪಳಿ ನಿರ್ಮಿಸೋಣ||೩||
ಜ್ಞಾನದ ದೀಪವನು ಹಚ್ಚಿ
ವಿಜ್ಞಾನದಿ ಮೂಢತೆಯ ಕಳೆಯೋಣ|
ಮಾಟ ಮಂತ್ರ ತಂತ್ರಗಳ ಕಳಚಿಟ್ಟು
ಸುಖ ಸಮೃದ್ಧಿಯ ತರೋಣ||೪||
ಸರಕಾರದ ಯೋಜನೆಗಳ ಮನವರಿಕೆ ಮಾಡಿ
ಮತದಾನ ಜಾಗೃತಿಯ ಎಲ್ಲರಲಿ ಮೂಡಿಸಿ|
ಜನತೆಗೆ ತಿಳಿಸೋಣ ಮನೆಗೆಲ್ಲ ತೆರಳಿ|
ನಾಯಕತ್ವದ ಗುಣವ ಬೆಳೆಸೋಣ ಸೇವೆಯಲಿ||೫||
ಗಂಡು ಹೆಣ್ಣೆಂಬ ಭೇದಗಳ ಮರೆತು
ಗ್ರಾಮಗಳ ಉದ್ದಾರಕೆ ಬದ್ಧರಾಗೋಣ|
ಪರಾವಲಂಬನೆಯ ಬದುಕ ಬಿಟ್ಟು
ಸ್ವಾವಲಂಬನೆಯ ಕಲಿಸೋಣ||೬||
ರಾಷ್ಟ್ರೀಯ ಸೇವಾಯೋಜನೆ ಮೂಲಕ
ಸೇವೆಗೆ ಸದಾ ಸಿದ್ದರಾಗೋಣ|
ಬನ್ನಿರಿ ಎಲ್ಲರೂ ಒಂದಾಗಿ ಇಂದು
ಜಗಕೆ ಯುವಶಕ್ತಿ ಒಗ್ಗಟ್ಟು ತೋರೋಣ||೭||
ಕವಿವಿ ಎನ್ ಎಸ್ ಎಸ್ ಕೋಶದ ನಾವು
ಬಂದಿಹೆವು ನಿಮ್ಮ ಗ್ರಾಮಕೆ ಇಂದು|
ನಮ್ಮ ಜೊತೆಗೆ ಕೈಜೋಡಿಸಿ ನೀವು
ಜಗವೆ ಮೆಚ್ಚುವ ಕೆಲಸ ಮಾಡೋಣ ಎಂದೆಂದೂ||೮||
* ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.