Skip to main content

ಶ್ರೀಕೃಷ್ಣ ನಗುತಿದ್ದ

ಇಂದ rashmi.n
ಬರೆದಿದ್ದುJune 16, 2012
noಅನಿಸಿಕೆ

    ಮಾಸಗಳೇ ಉರುಳಿದರೂ ನೀ ಮಾತ್ರ ಬರಲಿಲ್ಲ


     ಪುನಃ ನೋಡುವ ಭಾಗ್ಯ ಕಂಗಳಿಗೆ ಸಿಗಲಿಲ್ಲ


    ನಿನ್ನ ಮುರಳೀ ನಾದ ಕೇಳಿದಂತಾಗಿರಲು 


   ಧಾವಿಸಿದರೆ ಹೊರಗೆ, ಶೂನ್ಯ ಯಮುನಾತೀರ


  ಅಳುತಿಹಳು ಯಮುನೆಯೂ, ಮರಳಿ ಬಾರೆಯಾ ಕೃಷ್ಣಾ


   ಪ್ರಿಯನ ದನಿ ಕೇಳಿಸಿತು, ನಾನಿರುವೆ ಬಳಿಯಲ್ಲೇ


   ಇಣುಕು ನೀನೊಮ್ಮೆ ನಿನ್ನೆದೆಯ ಗುಡಿಯಲ್ಲೇ


   ಮುಸುಕಿದ ಮಾಯೆ ಸರಿದು ಒಳಗಣ್ಣ ತೆರೆದಾಗ


   ನನ್ನೊಳಗೇ ಶ್ರೀಕೃಷ್ಣ ಮುಗುಳು ನಗೆ ನಗುತಿದ್ದ


  

ಲೇಖಕರು

rashmi.n

ಸರಳ ಹಾಗೂ ನೆಮ್ಮದಿಯ ಬದುಕು ನನ್ನದು.
ಕವಿತೆಗಳನ್ನು ಗೀಚುವುದು, ಓದುವುದು ನನ್ನ ಹವ್ಯಾಸ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.