Skip to main content

ಇತ್ತೀಚಿನ ಅನಿಸಿಕೆಗಳು

ಹಾರುತ್ತಿರುವ ಈ ಜಗತ್ತಿನಲ್ಲಿ ಎಲ್ಲರಿಗೂ ಬೇಕು ಇಂಗ್ಲಿಷು......
..
ಕನ್ನಡದ ಬೆಳವನಿಗೆಯಲ್ಲಿ ಎಲ್ಲರ ಸಹಾಯ ಬೇಕಿದೆ... ಕನ್ನಡ ಹಸಿರಾಗಲಿ ಉಸಿರಾಗಲಿ....
..
ಆದಷ್ಟು ಎಲ್ಲ ಕಡೆ ಕನ್ನಡವನ್ನು ಮಾತನಾಡೋನ, ಕನ್ನಡವನ್ನು ಉಳಿಸೋಣ...
ಜೈ ಕನ್ನಡ.....
ಜೈ ಕನ್ನಡಾಂಬೆ....
(ಕನ್ನಡ ಕಂದನ ಕನ್ನಡದ ತಾಣ ಅದುವೇ https://t.me/spn3187 & www.spn3187.blogspot.in ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ)

ನಿಜವಾಗಿ ಈ ವಿಚಾರ ತುಂಬಾ ಸ್ವಾಗತಾರ್ಹ ರಾಜೇಶ್ ಅವರೇ..! ಅಂತೂ ಇಂತೂ ಮೈಸೂರು ಸ್ಯಾನ್ಡಲ್ ಸಾಬೂನಿನ ಕವರ್ ಮೇಲೆ ಕನ್ನಡ ದಲ್ಲಿ ಮುದ್ರಿಸಲಾಗುತ್ತಿದೆ. ಕರ್ನಾಟಕದಲ್ಲೇ ತಯಾರಾಗುವ ಪ್ರತೀ ಒಂದು ವಸ್ತು ಗಳ ಬ್ರಾಂಡ್ ಅನ್ನ ಕನ್ನಡದಲ್ಲೂ ಬರೆಸಿ ಅಥವಾ ಮುದ್ರಿಸಲೇ ಬೇಕೆಂದು ಕಡ್ಡಾಯ ಮಾಡದ ಹೊರತು ಇಂತಾವೆಲ್ಲಾ ತಾನಾಗೇ ಸಾಧ್ಯ ಆಗುವುದಿಲ್ಲ. ನಮ್ಮ ಕಂಬದ ಪರ ಸಂಘಟನೆಗಳಿ ಗಂತೂ ಇಂತಾವೆಲ್ಲಾ ಕಣ್ಣಿಗೆ ಕಾಣುವುದಿಲ್ಲ ಎನ್ನಿಸುತ್ತಿದೆ. ಅವರೆಲ್ಲಾ ಒಗ್ಗೂಡಿ ಮನಸ್ಸು ಮಾಡಿದರೆ ಇದು ಕೇವಲ ಒಂದೆರಡು ದಿನದ ಕೆಲಸ ಎನ್ನುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ..?? 💐ಶುಭವಾಗಲಿ💐

ತಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಎರಡನ್ನೂ ತಿಳಿಸಿದ್ದಕ್ಕೆ ಧನ್ಯವಾದಗಳು ರಾಜೇಶ್ ಅವರೇ. ಯಾಕೆ ಇತ್ತೀಚೆಗೆ ತಮ್ಮಿಂದಾಗಲೀ ಅಥವಾ ಓಡುಗರಿಂದಾಗಲೀ ಹೆಚ್ಚು ಲೇಖನಗಳು ಬರುತ್ತಿಲ್ಲ..? ತಾವು ವ್ಯಸ್ತರಾಗಿಬಿಟ್ಟಿರೋ ಅಥವಾ ಓದುಗರ ಯಾ ಬರಹಗಾರರ ಕೊರತೆಯೋ..?? ನಮ್ಮ ಜನಗಳಿಗೆ ಅದರಲ್ಲೂ ಇಂದಿನ ಯುವಜನತೆಗೆ ಕನ್ನಡದವರಾಗಿದ್ದರೂ ಕನ್ನಡ ಉಳಿಸಿ ಬೆಳೆಸುವ ಸಾಮಾಜಿಕ ಮತ್ತು ಭಾಷಾ ಕಾಳಜಿ ಇಲ್ಲ. ಇಂತಹಾ ಉತ್ತಮ ಜಾಲತಾಣವನ್ನು ಬೆಳೆಸಿ ಸಹಕರಿಸಿ ಪ್ರಚಾರ ಪಡಿಸದೆ ಫೇಸ್ ಬುಕ್ ಟ್ವಿಟ್ಟರ್ ಇತ್ಯಾದಿ ಗಳೇ ಬಹಳ ಆಕರ್ಷಕವಾಗಿ ಕಾಣುತ್ತವೆ ಅವರಿಗೆ. ಕನ್ನಡ ಗೊತ್ತಿದ್ದರೂ ಲಿಪಿ ಬರೆಯಲು ಸಹಕಾರಿಯಾಗುವ ಎಲ್ಲಾ ವಿಧಾನಗಳು ಲಭ್ಯವಿದ್ದರೂ ಕಂಗ್ಲೀಷಿನಲ್ಲೇ ಬರೆಯುವವರು 90% ಗೂ ಅಧಿಕ ಎಂದು ನನ್ನ ಅನಿಸಿಕೆ. ಪರಿಸ್ಥಿತಿ ಹೀಗಿರುವಾಗ ವಿಸ್ಮಯನಗರಿ ಯಂತಾ ಒಂದು ಶುದ್ಧ ಕನ್ನಡ ಜಾಲತಾಣ ಪ್ರಚಾರಗೊಳ್ಳುತ್ತಿಲ್ಲವಲ್ಲಾ ಎಂದು ಬಹಳ ಬೇಸರ ಆಗುತ್ತಿದೆ. ನನಗೆ ಸಮಯ ಇಲ್ಲದ ಕಾರಣ ಆಗೊಮ್ಮೆ ಈಗೊಮ್ಮೆ ಒಳ್ಳೆ ವಸ್ತು ವಿಷಯ ಸಿಕ್ಕಾಗ ಮಾತ್ರ ಬರೆಯುತ್ತಿದ್ದು ಪ್ರಕಟಿಸಲು ಹಾಕುತ್ತಿರುವೆ. ಬರೆಯಲು ಬೇಕಲ್ಲ ಎಂದು ಏನೋ ಗೀಚುವುದರಲ್ಲಿ ನನಗೆ ಅಭಿರುಚಿಯಿಲ್ಲ. ಶುಭವಾಗಲಿ.
ಧನ್ಯವಾದಗಳೊಂದಿಗೆ
-ತ್ರಿನೇತ್ರ.

ಧನ್ಯವಾದಗಳು ಮೇಲಧಿಕಾರಿಯವರೇ.

ಸಾಧನೆಯ ಹಾದಿಯಲ್ಲಿ ಕಲ್ಲುಗಳು ಮುಳ್ಳುಗಳು ಕಷ್ಟ ಕಾರ್ಪಣ್ಯಗಳು ಸಹಜ. ಅವೆಲ್ಲವನ್ನೂ ಲೆಕ್ಕಿಸದೇ ಮುನ್ನುಗ್ಗುವವರಿಗೆ ಗೆಲುವು ನಿಶ್ಚಿತ.  ಚೆನ್ನಾಗಿದೆ ನಿಮ್ಮ ಕವನ.😊 

ತುಂಬಾ ಒಳ್ಳೆಯ ಲೇಖನ ತ್ರಿನೇತ್ರ ಅವರೇ. ವಾಸ್ತವಾಗಿ ಇಂದು ಜಾತಿಯನ್ನು ಒಡೆಯುತ್ತಿರುವದು, ಹೊಸ ಧರ್ಮ ಬೇಕು ಎಂದು ಹಪಿಹಪಿಸುತ್ತಿರುವದು ಮಠಾಧೀಶರು ಹಾಗೂ ರಾಜಕಾರಣಿಗಳು. ಯಾಕೆ? ಒಬ್ಬರಿಗೆ ಜನರು ಹುಂಡಿಗೆ ಹಾಕುವ ಹಣದ ಹಾಗೂ ಸರಕಾರಿ ಅನುಧಾನ ಮೇಲೆ ಕಣ್ಣು ಇನ್ನೊಬ್ಬರಿಗೆ ಅವರ ಓಟಿನ ಮೇಲೆ ಕಣ್ಣು.
ಇನ್ನು ಹೆಚ್ಚಿನ ಮಾಧ್ಯಮಗಳು ಇವರ ಮುಖವಾಣಿ ಮಾತ್ರ ಆಗಿವೆ. ತಿರುಚಿ ಬರೆಯುವದೇ ಅವರ ಕೆಲಸ. ವಾಸ್ತವವಾಗಿ ಜನರ ನಡುವೆ ಕಚ್ಚಾಟ ಇಲ್ಲ. ಇರುವದಕ್ಕೆ ಜಾತಿಯ / ಧರ್ಮದ ಬಣ್ಣ ಕಟ್ಟಿ ಒಡೆದು ಆಳುವದೇ ಇವರು ಮಾಡುತ್ತಿರುವ ಕೆಲಸ ಅನ್ನುವದು ನನ್ನ ಅಭಿಮತ.

ಧನ್ಯವಾದಗಳು 

 

ಪ್ರಥಮ ಪ್ರಯತ್ನ ವಾಗಿ ಬರೆದಿದ್ದೀರಿ ಅನ್ನಿಸುತ್ತಿದೆ. ಸಧ್ಯ ಫೇಸ್ ಬುಕ್ ನಲ್ಲಿ ಇಷ್ಟಕ್ಕೆ ನಿಂತಿತಲ್ಲಾ ಅದಕ್ಕೆ ಸಂತೋಷ ಪಡಿ..! ಮೊದಲ ಸ್ನೇಹ ಆದಾಗ ಸಿಗುವ ಪುಳಕ ರೋಮಾಂಚನ ಎಲ್ಲಾ ಅದು ಸುಳ್ಳೆಂದು ತಿಳಿದಾಗ ಆಗುವ ಮಾನಸಿಕ ಆಘಾತಗಳೇ ಹೆಚ್ಚು. ಅಂತೂ ನಿಮ್ಮ ಬರಹದಲ್ಲಿ ಪದಗಳ ಜೋಡಣೆ ಚೆನ್ನಾಗಿದೆ. ಸ್ವಲ್ಪ ಪ್ರಯತ್ನಿಸಿದರೆ ಉತ್ತಮ ಬರಹಗಾರ್ತಿ ಆಗಬಹುದು. 

https://www.youtube.com/watch?v=FKqSdURl8Js&t=27s

nagisuva tonic Episodeಗಳನ್ನು ನೋಡಲು Youtube channel subscribe maadi 

ದಯವಿಟ್ಟು ಎಲ್ಲಿಯಾದರೂ ಸಣ್ಣಾಕಿನಿ ನಾ ಸಣ್ಣಾಕಿ, ಪುಟಾಣಿ ಬೆಲ್ಲಾ ನಾ ತಿನ್ನಾಕಿನಿ ಎಂಬ ಹಳೇಯ ಮಕ್ಕಳ ಹಾಡು ಸಿಗಬಹುದಾ?

ನಿಜ, ಇದು ನಾವು ದೇವರಿಗೆ ಮಾಡುತ್ತಿರುವ ಅವಮಾನ.ಇಂದು ವಿಧ್ಯಾವಂತರೆನಿಸಿಕೊಂಡವರು ಸಹ ಈ ಜಾಡಿನಲ್ಲಿ ಮುಂದುವರೆಯುತ್ತಿರುವುದು

 ಕೂಡ ಮುಜುಗರದ ಸಂಗತಿ.  ನಾಲಿಗೆಯ ಚಪಲಕ್ಕೆ ದೇವರ ಹೆಸರಿಟ್ಟು ಪ್ರಾಣಿಗಳ ಬಲಿ ಕೊಡುತ್ತಿರುವುದು ಅಪಾಯಕಾರಿ. 

ಸಖತ್ತಾಗೀದೆ