Skip to main content

ನಗುವು ಬರುತಿದೆ

ಬರೆದಿದ್ದುMay 18, 2015
5ಅನಿಸಿಕೆಗಳು

ನಗುವು ಬರುತಿದೆ ಎನಗೆ
x~x~x~x~x~x~x~x~x~x
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಜಗದೊಳಿರುವ ರಸಿಕರೆಲ್ಲ
ನಾಟಕ ಮಾಡುವುದ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ರಾಶಿ ರಾಶಿ ಗ್ರಂಥ ಓದಿ
ಜಪತಪಗಳ ಗೈದು ಕೊನೆಗೆ
ನೆರೆಯ ತರುಣಿ ಬರುತಲಿರಲು
ಬಗ್ಗಿ ನೋಳ್ಪರನ್ನು ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ದ್ರಿಕ್ಸ್ ವಾಲ್ ರಾತೀಬೆಂದು
ದಿನವು ಗುಣುಗಿ ಕುರ್ ಆನ್ ಪಠಿಸಿ
ಲವ್ ಜಿಹಾದ್ ಖೆಡ್ಡದಲ್ಲಿ
ಕೆಡವಿ ಸುಡುವರನ್ನು ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಜಾತಿಬೇಧ ಸಲ್ಲದೆನುತ
ನೀತಿ ನಿಯಮ ರೂಪಿಸುತ್ತ
ಜಾತಿ ಯಾವುದೆಂದು ಅರಿತು
ಕೆಲಸ ನೀಡುವವರ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಕೋಟಿ ಕೋಟಿ ಸಾಲ ತಂದು
ಮೇಟಿಗಾಗಿ ಸುರಿದೆವೆನುತ
ಮೇಟಿಸುತರ ಭೂಮಿ ನುಂಗೊ
ಕಾಂಕ್ರೀಟು ಬನದ ತೆಣೆಯ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಸಾಲು ಸಾಲು ಕವಿತೆ ಬರೆದು
ಒಡಲ ನಂಜು ಹೊರಗೆ ಸುರಿದು
ಬರೆದ ಖುಷಿಗೆ ತಂಪಿಗೆಂದು
ಕ್ವಾಟ್ರು ನುಂಗೋರ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ
ಬಟ್ಟೆ ಬಿಚ್ಚಿ ಕುಣಿವ ತರುಣಿ
ಕಣ್ಮನಗಳ ತುಂಬಿ ತುಳುಕೆ
ಪಟ್ಟದರಸಿ ಸೀರೆ ಸೆರಗು
ತುಸು ಜಾರಿದರು ಒದೆವರ ಕಂಡು
ನಗುವು ಬರುತಿದೆ ಎನಗೆ
ನಗುವು ಬರುತಿದೆ

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಅನಿಸಿಕೆಗಳು

Praveen kumar ಸೋಮ, 05/18/2015 - 14:43

ವಾಸ್ತವಕ್ಕೆ ಹತ್ತಿರವಾದ ಕವನ ತುಂಬಾ ಚೆನ್ನಾಗಿದೆ.

JAYARAM NAVAGRAMA ಸೋಮ, 05/18/2015 - 17:47

ತುಂಬಾ ಥ್ಯಾಂಕ್ಸ್ ಸರ್. ನಿಮ್ಮ ಪಿಸು ಮಾತೂ ಅಷ್ಟೇ, ತುಂಬಾ ಸೂಪರಾಗಿವೆ ಒಂದಕ್ಕಿಂತ ಒಂದು.
ನಾನು ಅಂಕ ಕೊಡುವ ಆಯ್ಕೆಯಲ್ಲಿ ಎಷ್ಟು ಸಲ ಪ್ರೆಸ್ ಮಾಡಿದರು ಓಟ್ ಬೀಳೋದಿಲ್ಲ. ಯಾಕೆಂತ ಗೊತ್ತಾಗುವುದಿಲ್ಲ.

Praveen kumar ಮಂಗಳ, 05/19/2015 - 10:43

ಜಯರಾಮ್ ಅವರೆ ಓಟು ಬೀಳದೆ ಇರುವುದಕ್ಕೆ ಎನೋ ತಾಂತ್ರಿಕ ಲೋಪ ದೋಷ ಕಾರಣ ಅನ್ಸುತ್ತೆ..! ಆದ್ರೆ ನಂಗೆ ಓಟು ಬೀಳುವುದು ಮುಖ್ಯ ಅಲ್ಲ.. ನೀವು ನನ್ನ ಲೇಖನ ಓದಿ ನನ್ನ ಪ್ರೋತ್ಸಾಹಿಸುತ್ತೀರಲ್ಲ ಅದು ನಂಗೆ ತುಂಬಾನೆ ಖುಷಿ ಕೊಡುತ್ತೆ..! ನಿಮಗೂ ಒಳ್ಳೆಯ ಲೇಖನ ಬರೆಯುವ ಸಾಮಾರ್ಥ್ಯ ಇದೆ.ಖಂಡಿತ ಬರೆಯಿರಿ. ಧನ್ಯವಾದಗಳೊಂದಿಗೆ ಪ್ರವೀಣ್..!

Shambanagouda ಗುರು, 05/28/2015 - 14:38

ಈ ಲೆಖನ ತು೦ಬಾ ಚೆನ್ನಾಗಿದೆ

 

 

JAYARAM NAVAGRAMA ಗುರು, 05/28/2015 - 20:24

ಪ್ರಿಯ ಗೆಳೆಯ ಶಾಂಬನಗೌಡರೇ, ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ನಾನು ಇನ್ನೂ ಅನೇಕ ಕವನ ಕತೆ ಇತ್ಯಾದಿಗಳನ್ನು ಬರೆಯರುವೆನು. ಓದಿ ಪ್ರೀತಿಯಿಂದ ಅನಿಸಿಕೆ ಬರೆಯಿರಿ. ನಿಮ್ಮ ಮಿತ್ರ ಜಯರಾಮ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.