Skip to main content
Forums

ಸಾಮಾನ್ಯವಾಗಿ, ಕಥೆ-ಕವನಗಳನ್ನು ಬರೆಯುವವರು ಮೌನಿಗಳಾಗಿರ್ತಾರೆ ಅಂತ ಹೇಳ್ತಾರೆ.ಅದಕ್ಕೆ ನೀವೇನು ಹೇಳ್ತೀರ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

snehita (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/12/2011 - 13:35

ಅವರು ಯಾವಾಗಲೂ ತಮ್ಮದೇ ಆದ ಕಾಲ್ಪನಿಕ ಭಾವನಾಲೋಕದಲ್ಲಿ ಸ೦ಚರಿಸುತ್ತಿರುತ್ತಾರೆ, ಆಗ ಅವರು ತಮ್ಮ ಕೇವಲ ಬರಹದ ಮೇಲೆ, ಪದಗಳ ಜೋಡಣೆಯ ಬಗ್ಗೆ ಏಕಾಗ್ರತೆ ಹೊ೦ದಿರುತ್ತಾರೆ. ಹಾಗಾಗಿ ಅವರು ಮಾತನಾಡದ ಮೌನಿಗಳು.

krishna 33 ಗುರು, 01/13/2011 - 09:52

ಸಾಮಾನ್ಯವಾಗಿ ಮೌನಿಯಾಗಿರುವವರು ಆಲೋಚನೆಯಲ್ಲಿರುತ್ತಾರೆ ಎಂದು ನನ್ನ ಬಾವನೆ. ಏಕೆಂದರೆ ಯೋಚಿಸುವವನು ನಮಗೆ ಮೌನಿಯಾಗಿ ಕಾಣಬಹುದು, ಆದರೆ ಅವನು ತನ್ನ ಮನಸ್ಸಿನಲ್ಲಿ ಬರೆಯುತ್ತಿರಬಹುದು, ಇಲ್ಲ ಕಲ್ಪನೆಯ ಚಿತ್ರ ಬಿಡಿಸುತ್ತಿರಲೂ ಬಹುದು.ಮೌನ ಇಲ್ಲದಿದ್ದರೆ ಮನಸ್ಸಲ್ಲಿ ಬಾವನೆಗಳು ನಿಲ್ಲಲು ಸಾದ್ಯವಿಲ್ಲ ಎಂದು ನನಗನ್ನಿಸುತ್ತದೆ ಅದಕ್ಕೆ ಕಥೆ,ಕವನ ಬರೆಯುವವರು ಸರ್ವೇಸಾದಾರಣವಾಗಿ ಮೌನಿಯಾಗಿರುವಂತೆ ಕಾಣುತ್ತದೆ ಗೆಳತಿ
ನಿಮ್ಮಗೆಳೆಯ ವಿ ಕೃಷ್ಣಮೂರ್ತಿ

ಮೌನಿಯಾಗಿರ್ತಾರೆ ಅಂತಾ ಯಾರು ಹೇಳತಾರೆ ?  ಅದು ಕೆಲವೊಬ್ಬರ ಮಾತ್ರ ಎಕಾಂತವನ್ನು ಬಯಸಿ ಬರೆಯುವವರು ಅಥವಾ ನಿಸರ್ಗವನ್ನು ಹೆಚ್ದು ಬಯಸುವವರು ಅನೇಕ ಕಥೆ ಕವಿತೆಗಳು ಮೂಡಿ ಬರುವುದು ಗೌಜು ಗದ್ದಲಗಳ ನಡುವೆಯೇ. ಇದು ನನ್ನ ಅನುಭವ ಕೂಡಾ. ಜಿಎಸ್ಎಸ್ ನಂತವರು ಮುಂಬೈಜಾತಕ ಬರೆದಿರುವುದು ಇಂತಾ ಸಮಯದಲ್ಲೆ ಎಂಬುವದನ್ನು ಅವರೆ ಅವರ ಮಾತುಗಳಲ್ಲಿ ಹೇಳಿದ್ದಾರೆ.

ರವಿಶಾಂತ್ ಧ, 07/18/2012 - 20:09

ಆತ್ಮೀಯರೇ, ಕಥೆ, ಕವನಗಳನ್ನ ಬರೆಯುವವರು ಮೌನಿಗಳಾಗಿರುತ್ತಾರೆ ಇದು ಶೇಖಡ ೧೦೦ ರಷ್ಟು ಸತ್ಯ.


ಬಸವರಾಜ ಮರಳಿಹಳ್ಳಿ ಯವರ ಪ್ರಕಾರ "ಕಥೆ ಕವಿತೆಗಳು ಮೂಡಿ ಬರುವುದು ಗೌಜು ಗದ್ದಲಗಳ ನಡುವೆ", ಎಂಬುದು.

ಹಾಗಿದ್ದರು ಇದು ಸ್ವಂತಃಹ ವಾಗಿ ಬರೆಯುವ ಕಥೆಯಾಗಿರುವುದಿಲ್ಲ. ಮತ್ತೊಬ್ಬರ ಆಶಾಭಾವಣೆಯನ್ನ ಅರಿತು ಬರೆಯುವುದಾಗಿರುತ್ತದೆ.

ಬಸವರಾಜುರವರೆ,  "ಎಕಾಂತವನ್ನು ಬಯಸಿ ಬರೆಯುವವರು ಅಥವಾ ನಿಸರ್ಗವನ್ನು ಹೆಚ್ಚು ಬಯಸುವವರು ಮೌನಿಗಳಾಗಿರುತ್ತಾರೆ "  ಎಂದು ಹೇಳಿದ್ದಾರೆ. ಅಂದರೆ ನೇರವಾಗಿ ಅಲ್ಲದಿದ್ದರು ಅವರೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ನೀವೇನೆನ್ನುತ್ತೀರಿ!!!!!!!!!!!!!!!!!!!!!!!!!
  • 1121 views