ಒಬ್ಬ ವ್ಯೆಕ್ತಿಯು ನೂಡಲು ಚಿಕ್ಕವನಗಿದ್ದರು ಅವನ ಸಾದನೆ ಮಾತ್ರ ದೂಡ್ಡದು ಇದೆ ಈ ನುಡಿಯ ಆರ್ಥ
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗ ವಿಲ್ಲ
ಹುಸಿನಗುತ ಬಂದೇವ, ನಸುನಗುತ ಬಾಳೋಣ, ತುಸುನಗುತ ತೆರಳೋಣ,
ಬಡನೂರು ವರುಷನಾ ಹರುಷದಿ ಕಳೆಯೋಣ ಯಾಕಾರೆ ಕೆರಳೋಣ?
ಚಂದ್ರನ ಮೇಲಿರುವ ಮಚ್ಚೆ ಅದರ ಅಮೋಘ ಸೌಂದರ್ಯದ ಮುಂದೆ ಗೌಣವಾದಂತೆ, ಒಂದು ದೋಷ ಹಲವು ಒಳ್ಳೆಯ ಗುಣಗಳಿಂದ ಮುಚ್ಚಲ್ಪಡುತ್ತದೆ. (ಕುಮಾರಸಂಭವ)
ಕೊಟ್ಟವ ಕೋಡಂಗಿ ಈಸ್ಕೊಂಡವ ವೀರಭದ್ರ.
ನಾವಾಡುವ ಮಾತುಗಳು ನಮ್ಮ ನಡತೆಯನ್ನು ತೋರಿಸುತ್ತವೆ.
ದುರ್ಭಲವಾಗಿದ್ದರೂ ಜಾಸ್ತಿ ಸಂಖ್ಯೆಯಲ್ಲಿದ್ದರೆ ಶಕ್ತಿ ಬರುತ್ತದೆ.ಅನೇಕ ಹುಲ್ಲು ಕಡ್ಡಿಗಳಿಂದ ಮಾಡಲ್ಪಟ್ಟ ಹಗ್ಗ ಕೂಡಾ ಆನೆಯನ್ನು ಬಂಧಿಸಿ ಹಿಡಿದಿಡಬಲ್ಲುದು.
ಮನುಷ್ಯರು ಹೇಗೆ ಸತ್ತರೆಂಬುದಕ್ಕಿಂತಲೂ ಹೇಗೆ ಬದುಕಿದ್ದರೆಂಬುದು ಮುಖ್ಯ.
ಮಂಗಳ, 02/03/2010 - 13:32 - ಉಮಾಶಂಕರ ಬಿ.ಎಸ್
ಸಮಯವೆಂಬುದು ಪ್ರಾಣಕ್ಕೆ ಸಮ. ಅದನ್ನು ವ್ಯಯಿಸುವುದು ನಿನ್ನನ್ನು ನೀನೇ ಹತ್ಯೆ ಮಾಡಿಕೊಂಡಂತೆ
ಆದಾಯ ಎನ್ನುವುದು ಪಾದರಕ್ಷೆ ಇದ್ದಂತೆ- ಚಿಕ್ಕದಾದರೆ ಕಚ್ಚುತ್ತದೆ,ದೊಡ್ಡದಾದರೆ ಹೆಜ್ಜೆ ತಪ್ಪುತ್ತದೆ.