ಕೊಡಗಿನ ಕಾವೇರಿ ತೀರದಲ್ಲಿರುವ ಸುಂದರ ಪ್ರವಾಸಿ ತಾಣವೇ ಕಾವೇರಿ ನಿಸರ್ಗಧಾಮ. ಇಲ್ಲಿ ಆನೆ ಸವಾರಿ, ಬೋಟಿಂಗ್, ದೋಣಿ ವಿಹಾರ ಮತ್ತು ಜಿಂಕೆ ಎಲ್ಲ ಇದೆ. ಆನೆ ಸವಾರಿ, ಬೋಟಿಂಗ್ ಮಾಡುವ ಇಚ್ಚೆ ಇದ್ದರೆ ಪ್ರವೇಶ ಟಿಕೆಟ್ ತೆಗೆದುಕೊಳ್ಳುವಾಗಲೇ ಖರೀದಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಮತ್ತೆ ವಾಪಸ್ ಬಂದು ಖರೀದಿಸಬೇಕಾಗುತ್ತದೆ.
ಟಿಕೆಟ್ ತೆಗೆದುಕೊಂಡು ದೊಡ್ಡ ಪ್ರವೇಶ ದ್ವಾರ ದಾಟಿದ ನಂತರ ನಮಗೆ ಸಿಕ್ಕಿದ್ದು ತೂಗು ಸೇತುವೆ. ತೂಗು ಸೇತುವೆ ದಾಟಿ ಬಲಕ್ಕೆ ತಿರುಗಿ ಕೆಳಕ್ಕಿಳಿದರೆ ಅಲ್ಲಿ ಬೋಟಿಂಗ್ , ದೋಣಿ ವಿಹಾರ ನಡೆಯುತ್ತಿತ್ತು. ನಮ್ಮ ಸರದಿ ಕಾದು ಪೆಡಲ್ ಬೋಟಿಂಗ್ ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು. ಯಾರೂ ನೀರಲ್ಲಿ ಕೈ ಹಾಕಬೇಡಿ ಮೊಸಳೆ ಇರಬಹುದು ಎಂದು ಪ್ರವಾಸಿಗರನ್ನು ದೋಣಿಯವರು ಎಚ್ಚರಿಸುತ್ತಿದ್ದರು.
ಒಂದು ಹದಿನೈದು ನಿಮಿಷ ಬೋಟಿಂಗ್ ಮಾಡಿ ಆನೆ, ಜಿಂಕೆ ಇರುವ ಕಡೆ ಹೊರಟೆವು. ಜಿಂಕೆಯನ್ನು ಇಲ್ಲಿ ಹತ್ತಿರದಿಂದ ಮುಟ್ಟಿ ನೋಡಬಹುದು. ಹೆಚ್ಚು ಕಡಿಮೆ ಆಕಳ ಕರು ಮುಟ್ಟಿದ ಅನುಭವ! ಜಿಂಕೆಗಳಿಗೆ ಎಲೆಕೋಸನ್ನು ಖರೀದಿಸಿ ತಿನ್ನಲು ಕೊಟ್ಟೆವು. ಅದನ್ನು ತಿನ್ನಲು ಜಿಂಕೆಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿತ್ತು.
ಆ ದಿನ ಆನೆ ಸವಾರಿಯ ಟಿಕೆಟ್ ನಾವು ತೆಗೆದುಕೊಳ್ಳಲಿಲ್ಲ. ದೂರದಿಂದಲೇ ಆನೆ ಸವಾರಿ ಮಾಡುತ್ತಿದ್ದ ಬೇರೆಯವರನ್ನು ವೀಕ್ಷಿಸಿ ವಾಪಸ್ ಹೊರಟೆವು. ನಿಸರ್ಗ ಧಾಮದ ಒಳಗೆ ಅಂಗಡಿಗಳಿದ್ದು ಕೂಲ್ ಡ್ರಿಂಕ್ಸ್, ಐಸ್ ಕ್ರೀಮ್ ಮೊದಲಾದವು ಸಿಗುತ್ತವೆ.
ಅಲಂಕಾರಿಕ ವಸ್ತುಗಳು ಸಿಗುತ್ತವೆ. ಆದರೆ ಬೆಲೆ ದುಬಾರಿ.
ನಿಸರ್ಗ ಧಾಮದ ಹೆಬ್ಬಾಗಿಲು
ನಿಸರ್ಗ ಧಾಮದ ತೂಗು ಸೇತುವೆ
ನಿಸರ್ಗಧಾಮ ದೋಣಿ ವಿಹಾರ
ಪೆಡಲ್ ಬೋಟಿಂಗ್
ನಿಸರ್ಗ ಧಾಮ ಜಿಂಕೆಗಳು
ನಿಸರ್ಗ ಧಾಮ ಆನೆ ಸವಾರಿ

ನಿಸರ್ಗಧಾಮ ಸಕ್ಕತ್ತಾಗಿದೆ.
ನಿಸರ್ಗಧಾಮ ಸಕ್ಕತ್ತಾಗಿದೆ. ೯೫ರಲ್ಲಿ ನೋಡಿದ್ದು.
ಕರ್ನಾಟಕ ರಾಜ್ಯ ಕಾರ್ಯನಿರತ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ 29ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಇದೆ ವರ್ಷ ಫೆಬ್ರುವರಿಯಲ್ಲಿ ಮಡಿಕೇರಿಯಲ್ಲಿ ನಡೆದಾಗ ಪಾಲ್ಗೊ0ಡಿದ್ದ ನಾನು,ನನ್ನ ಗೆಳೆಯರ ಜೊತೆ ನಿಸರ್ಗಧಾಮ,ದುಬಾರೆ ಇತರ ಕಡೆ ಸುತ್ತಾಡಿ ಖುಷಿ ಪಟ್ಟಿದ್ದೆ.ಈಗ ಮತ್ತೊಮ್ಮೆ ಲೇಖನ-ಚಿತ್ರಗಳನ್ನು ನೋಡಿ ಮತ್ತೆ ಮರುಕಳಿಸಿತು.ಧನ್ಯವಾದಗಳು ರಾಜೆಶ್.-ಡಾ.ಪ್ರಭು.ಗ0ಜಿಹಾಳ್.
ಬರಹ ಚೆನ್ನಾಗಿದೆ. ಫೋಟೊ ದಲ್ಲಿ
ಬರಹ ಚೆನ್ನಾಗಿದೆ. ಫೋಟೊ ದಲ್ಲಿ ಬ್ರಹ್ಮ ಪುತ್ರ ಸ್ಪೆಲ್ಲಿ0ಗ್ ತಪ್ಪಾಗಿದೆ.
ರಾಜೇಶ್...... ಚಿತ್ರಗಳು
ರಾಜೇಶ್...... ಚಿತ್ರಗಳು ಚೆನ್ನಾಗಿವೆ.
ಶ್ಯಾಮಲ
Nice pics.
Nice pics.
ನಿಮ್ಮ ಅನಿಸಿಕೆ ತಿಳಿಸಿ