ಈ ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ನಮ್ಮನ್ನು ಈ ತ್ರಿಗುಣಗಳ ಜಾಲದಲ್ಲಿ ಬಂಧಿಸಲು ಕಾರಣವೇನು? ಬೇರೆ ದಾರಿಯಿರಲಿಲ್ಲವೇ ಎಂದು ಯೋಚಿಸಿದಾಗ ತೋಚುವ ಉತ್ತರ ಇದು:
ಮುಂದೆ ಓದು
ಈ ಹಿಂದಿನ ಭಾಗದಲ್ಲಿ ನಾವು ಜೀವಿಗಳ ಮೇಲೆ ಪ್ರಕೃತಿಯು ಯಾವ ರೀತಿಯಾಗಿ ತನ್ನ ಪ್ರಭಾವವನ್ನು ತೋರಿಸುವುದು, ಈ ಪ್ರಭಾವದ ಮೂರು ಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸು ಎಂದರೇನು ಮತ್ತು ಈ ಮೂರು ಗುಣಗಳ ಪ್ರಭಾವವೇ ನಮ್ಮ ಚಾತುರ್ವರ್ಣ ಪದ್ಧತಿಗೆ ಮೂಲವಾಗಿತ್ತು ಎಂಬುದನ್ನು ಅರಿತುಕೊಂಡೆವು. ಈ ಚಾತುರ್ವರ್ಣ ಪದ್ಧತಿಗೆ ಸಂಬಂಧಿಸಿದ ಒಂದು ಮುಖ್ಯವಾದ ಶ್ಲೋಕವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ:
ಮುಂದೆ ಓದು
ಇದುವರೆಗೆ ನಾವು ಪ್ರಕೃತಿ ಎಂದರೇನು ಮತ್ತು ಅದರ ಸ್ವರೂಪವೇನು ಎಂಬುದನ್ನು ಅರಿತುಕೊಂಡೆವು.
ಈಗ ಪ್ರಕೃತಿಯು ನಮ್ಮ ಮೇಲೆ ಉಂಟುಮಾಡುವ ಪ್ರಭಾವವೆಂತಹುದು ಎಂಬುದನ್ನು ತಿಳಿಯೋಣ:
ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ |
ಮುಂದೆ ಓದುಇಲ್ಲಿಯವರೆಗೂ ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ದ್ರವ್ಯ ಮತ್ತು ಅಖಂಡ, ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಎಂಬ ವಿಷಯಗಳನ್ನು ಕೂಡ ಅರಿತೆವು. ಇದನ್ನೇ ನಮ್ಮ ಋಷಿಗಳು ಪುರುಷ ಎಂದು ಕೂಡ ಹೆಸರಿಸಿರುವುದು. ಈಗ ಈ ಪರಮಾತ್ಮನ ಇನ್ನೊಂದು ಮುಖವಾದ ಪ್ರಕೃತಿಯನ್ನು ಅರಿಯುವ ಪ್ರಯತ್ನ ಮಾಡೋಣ. ಪ್ರಕೃತಿಯ ವಿವರಣೆಯನ್ನು ಶ್ರೀಕೃಷ್ಣನ ಮಾತುಗಳಲ್ಲೇ ಕೇಳೋಣ:
ಮುಂದೆ ಓದುಪರಮಾತ್ಮನು ನಮ್ಮ ಒಳಗೂ ಹೊರಗೂ, ನಮ್ಮ ಸಮೀಪದಲ್ಲೂ ದೂರವಾಗಿಯೂ ಇರುತ್ತಾನೆ. ಹಾಗೆಯೇ ಪರಮಾತ್ಮನು ಚಲಿಸುತ್ತಲೂ ಇರುತ್ತಾನೆ ಮತ್ತು ನಿಶ್ಚಲನಾಗಿಯೂ ಇರುತ್ತಾನೆ. ಆತನು ಅಖಂಡ ಅಂದರೆ ಬ್ರಹ್ಮಾಂಡಕ್ಕೆಲ್ಲ ಒಬ್ಬನೇ ಮತ್ತು ಅವನು ಬ್ರಹ್ಮಾಂಡದಲ್ಲೆಲ್ಲಾ ಹಾಸುಹೊಕ್ಕಾಗಿದ್ದಾನೆ.ಮುಂದೆ ಓದು
ಈ ಬ್ರಹ್ಮಾಂಡದ ಮೂಲಭೂತ ದ್ರವ್ಯವಾದ ಪರಮಾತ್ಮನು ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವಜ್ಞ, ನಿರಪೇಕ್ಷ ಮತ್ತು ಅನುಭವಶಕ್ತ ಎಂಬ ವಿಷಯಗಳನ್ನು ಹಿಂದಿನ ಭಾಗದಲ್ಲಿ ಕೊಂಡುಕೊಂಡೆವು. ಅನುಭವಶಕ್ತನಾದರೂ ಪರಮಾತ್ಮನಿಗೆ ‘ಇನ್ನೂ ಬೇಕು’ ಎನ್ನುವ ದಾಹ ಅಥವಾ ಅನುಭವಾಸಕ್ತಿ ಇಲ್ಲವೆಂದು ತಿಳಿದೆವು. ಈ ದಾಹವಿಲ್ಲದ ಗುಣವನ್ನು ನಾವು ಒಂದು ಅತ್ಯಮೂಲ್ಯ ಗುಣವೆಂದು ಗುರುತಿಸಬೇಕಾಗುತ್ತದೆ.ಮುಂದೆ ಓದು
ಹಿಂದಿನ ಭಾಗದಲ್ಲಿ, ಆತ್ಮ ಎಂದರೇನು, ಪರಮಾತ್ಮ ಎಂದರೇನು ಎಂದು ಸ್ಥೂಲವಾಗಿ ತಿಳಿದೆವು. ಮತ್ತು ಪುನರ್ಜನ್ಮದ ಪ್ರತಿಪಾದನೆಯನ್ನು ಕಂಡೆವು. ಈಗ ಈ ಪರಮಾತ್ಮನ ಗುಣವಿಶೇಷಗಳನ್ನು ವಿಸ್ತಾರವಾಗಿ ತಿಳಿಯೋಣ. ಆದರೆ, ಅದಕ್ಕೋಸ್ಕರ ನಾವು ಭಗವದ್ಗೀತೆಯ ಎರಡನೇ ಅಧ್ಯಾಯದಿಂದ ಹದಿಮೂರನೆಯ ಅಧ್ಯಾಯಕ್ಕೆ ಜಿಗಿಯಬೇಕಾಗುವುದು. ಪರಮಾತ್ಮನ ಬಗ್ಗೆ ಇನ್ನೂ ಹೆಚ್ಚು ತಿಳಿದಾದಮೇಲೆ ಮತ್ತೆ ಎರಡನೇ ಅಧ್ಯಾಯಕ್ಕೆ ಹಿಂದಿರುಗೋಣ. ಹದಿಮೂರನೆಯ ಅಧ್ಯಾಯದ ಒಂದು ಶ್ಲೋಕ ಹೀಗಿದೆ:
ಸರ್ವತಃ ಪಾಣಿಪಾದಂ ತತ್ ಸರ್ವತೋಕ್ಷಿಶಿರೋಮುಖಮ್ |
ಸರ್ವತಃಶೃತಿಮಲ್ಲೋಕೇ ಸರ್ವಮಾವೃತ ತಿಷ್ಠತಿ ||
ಮುಂದೆ ಓದು
ಹಿಂದಿನ ಭಾಗದಲ್ಲಿ ಆತ್ಮದ ಒಂದು ಮುಖವನ್ನು ಪರಿಚಯ ಮಾಡಿಕೊಂಡೆವು. ಆತ್ಮವು ಪಂಚೇಂದ್ರಿಯಗಳಿಗೆ ಅನುಭವವಾಗುವ ವಸ್ತುವಲ್ಲ ಎಂಬುದನ್ನು ಅರಿತೆವು. ಆದ್ದರಿಂದ ಆತ್ಮವು ಮಾನವ ನಿರ್ಮಿತ ಯಾವುದೇ ಉಪಕರಣಗಳಿಗೂ ಗೋಚರವಾಗುವ ಸಾಧ್ಯತೆ ಇಲ್ಲ. ಏಕೆಂದರೆ ನಮ್ಮ ಎಲ್ಲ ಪರಿಕರಗಳು ಮತ್ತು ಉಪಕರಣಗಳು, ಎಷ್ಟೇ ಶಕ್ತಿಶಾಲಿಯಾಗಿರಲಿ, ಅವು ಪಂಚಭೂತಗಳಿಂದ ನಿರ್ಮಿತವಾದವುಗಳು ಮತ್ತು ನಮ್ಮ ಪಂಚೇಂದ್ರಿಯಗಳಿಗಾಗಿ ಹೇಳಿಮಾಡಿಸಿದವುಗಳು!
ಭಗವದ್ಗೀತೆಯ ಮೊದಲನೆಯ ಅಧ್ಯಾಯದಲ್ಲಿರುವ ಪೀಠಿಕೆಯ ಬಗ್ಗೆ ಅರಿತೆವು. ಎರಡನೆಯ ಅಧ್ಯಾಯದಲ್ಲಿ 72 ಶ್ಲೋಕಗಳಿವೆ. ಕೊನೆಯದಾದ 18ನೇ ಅಧ್ಯಾವನ್ನು ಹೊರತುಪಡಿಸಿದರೆ ಇದು ಅತ್ಯಂತ ದೊಡ್ಡ ಅಧ್ಯಾಯ. ಶ್ರೀಕೃಷ್ಣನು ಈ ಅಧ್ಯಾಯದಲ್ಲಿ ನಮಗೆ ಅನೇಕ ಮುಖ್ಯವಾದ ವಿಷಯಗಳನ್ನು ಬೋಧಿಸಿದ್ದಾನೆ. ಈ ಅಧ್ಯಾಯದಲ್ಲಿ ಈ ಕೆಳಗಿನ 5 ಮುಖ್ಯ ಭಾಗಗಳಿವೆ: ಮುಂದೆ ಓದು
ಭಗವದ್ಗೀತೆಯ ಬಗ್ಗೆ ಇನ್ನೂ ಹೆಚ್ಚು ಹೇಳುವುದಕ್ಕೆ ಮುಂಚೆ ನನ್ನ ಒಂದು ಒಂದು ಅಭಿಪ್ರಾಯವನ್ನು ಮಂಡಿಸಬೇಕಿದೆ. ನಮ್ಮಲ್ಲಿ ಒಬ್ಬರು ಇದೆಲ್ಲವನ್ನೂ ಶ್ರೀಕೃಷ್ಣ ಪರಮಾತ್ಮನೇ ಹೇಳಿರುವನೇ ಅಥವಾ ಅವನ ಹೆಸರಿನಲ್ಲಿ ಕೆಲವು ಶ್ಲೋಕಗಳನ್ನು ಬೇರೆ ಯಾರಾದರೂ ಸೇರಿಸಿರಬಹುದೇ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಪ್ರಶ್ನೆ. ನನ್ನ ಮಟ್ಟಿಗೆ ಹೇಳುವುದಾದರೆ, ಜ್ಞಾನವನ್ನು ಯಾರು ನೀಡಿದರೂ ಚಿಂತೆಯಿಲ್ಲ!ಮುಂದೆ ಓದು